ಅನುಭಾವಿ, ಸಮಾಜ ಸುಧಾರಕ, ಧಾರ್ಮಿಕ ಮುಖಂಡ, ಕ್ರಾಂತಿಕಾರ, ಕಾಯಕನಿಷ್ಠ, ಮೇಲಾಗಿ ಕವಿ. ೧೨ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ. ಇವರ ವ್ಯಕ್ತಿತ್ವ ಬಹುಮುಖವಾದುದಾದರೂ ಇವರನ್ನು ಕುರಿತು ಅನೇಕ ವ್ಯಗಳು ರಚಿತವಾಗಿದ್ದರೂ ಅವುಗಳಲ್ಲಿ ಯಾವುದರಲ್ಲೂ ಇವರ ವ್ಯಕ್ತಿತ್ವದ ಸಮಗ್ರ ಯಥಾವತ್ತಾದ ಚಿತ್ರಣ ಮೂಡಿ ಬಂದಿಲ್ಲ. ಅವೆಲ್ಲ ಪವಾಡಗಳಲ್ಲಿ ಹುದುಗಿ ಹೋಗಿವೆ. ಆದರೆ ೧೪೦೦ಕ್ಕೂ ಹೆಚ್ಚು ಸಂಖ್ಯೆಯಲ್ಲಿ ದೊರೆತಿರುವ ಇವರ ವಚನಗಳಿಂದ ಹಾಗೂ ಪುರಾಣಗಳಲ್ಲಿ ಸೂಚಿತವಾಗಿರುವ ಘಟನೆಗಳಿಂದ ಚಾರಿತ್ರಿಕ ಅಂಶಗಳನ್ನು ಹೆಕ್ಕಿ ತೆಗೆದು ಇವರ ಜೀವನಚಿತ್ರವನ್ನೂ ಸಾಧನೆಗಳನ್ನೂ ಕಾಣಬೇಕಾಗಿದೆ. ಬಸವಣ್ಣನವರ ಬದುಕನ್ನು ವಿವಿಧ ಪುರಾಣಗಳ ನೆರವಿನಿಂದ ಹೀಗೆ ಪುನಾರಚಿಸಬಹುದು.
ಯಾವುದೇ ವಿಷಯಗಳ ಬಗ್ಗೆ ನಿಮ್ಮಲ್ಲಿರುವ ಮಾಹಿತಿಯನ್ನು,ಅರಿವನ್ನು ೬೦೦-೭೫೦ ಪದಗಳ ಮಿತಿಯಲ್ಲಿ ೧.ಅದು ಅ ಏನು?(ವ್ಯಕ್ತಿಯಾಗಿದ್ದರೆ ಯಾರು?) ೨.ಹುಟ್ಟು೩.ಮೊದಮೊದಲ ಹಂತದ ಬೆಳೆವಳಿಗೆ ೪.ಮುಂದಿನ ಹಂತಗಳು ೫.ಸಾಧನೆ,ಸಿದ್ಧಿ ೬.ಸುತ್ತಲಿನ ಜಗತ್ತಿಗೆ ಅದರಿಂದ ಆಗುತ್ತಿರುವ ಲಾಭ ೭.ಏನಾದರು ಹಾನಿ ಆಗುತ್ತಿದ್ದರೆ ಆ ವಿವರಗಳು ೮.ಸೂಕ್ತವಾದ ಅಂಕಿ-ಅಂಶಗಳು ೯.ಇಡೀ ವಿಷಯ ಕುರಿತು ಪ್ರಚಲಿತ ವಿದ್ಯಮಾನ,ಹೊಸ ಅರಿವಿನ ಸೇರ್ಪಡೆ- ಹೀಗೆ ಕ್ರಮವಾಗಿ ೭-೮ ಪದಗಳಲ್ಲಿ ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಲೇಖನಗಳನ್ನು ಬರೆದು ಕಳಿಸಿ.ಪಕ್ಕದ ಗಿಡದಲ್ಲಿ ಅರಳಿರುವ ಹೂವಿನ ಕಥೆಯಿಂದ ಹಿಡಿದು ಬ್ರಹ್ಮಾಂಡದ ಉಗಮದವರೆಗಿನ ಲೇಖನಗಳನ್ನೂ ಕಳಿಸಬಹುದು.